ನಿಸರ್‍ಗ

ಮುಗಿಲ ನೀಲಿಯ ಬಣ್ಣ ಹಲವು ಹೂಗಳ ಬಣ್ಣ
ನಿಂತ ನೆಲದಾಸೊಬಗೊ ಹರಿವ ನೀರಿನ ಬೆಡಗೊ
ಒಂದೆರಡೆ ಸೌಭಾಗ್ಯ ನೋಡೆ ಸಾಲದು ಕಣ್ಣ
ಈ ವಿಶ್ವದೈಸಿರಿಯ ಮುಖಕೆಲ್ಲಿ ಇಹುದೆಡರೊ?

ಸಿಡಿಲಾಗಿ ಗುಡುಗುವದು ನೀರೆಯೋಲು ಮೆರೆಯುವದು
ಭಕ್ತನೋಲು ಸಂತಸದಿ ಕುಣಿದಾಡಿ ನಲಿಯುವದು
ನಿತ್ಯ ನೂತನವಾಗಿ ಚಿತ್ತದಲಿ ಮೆರೆಯುವದು
ಎಂದಿಗಿದರಾಳವದು ಯಾರಿಂಗೆ ತಿಳಿಯುವದು?

ವಿಶ್ವರೂಪವ ಕಂಡು ನಡುನಡುಗಿ ಬೀಳುತಿಹ
ಅರ್ಜುನನ ತೆರದಿನಾ ಓ ನಿಸರ್‍ಗವೆ ನಿನ್ನ
ರುದ್ರರೂಪವ ಕಂಡು ಕಂಪಿಸುವೆ ಹೂಳುತಿಹ
ಭೀಕರತೆಯನ್ನತ್ತ ನೂಕಿ ಮಾತೆಯೆ ಎನ್ನ

ಮನವನ್ನು ಸಂತೈಸು ರಾಮಣೀಯಕ ರೂಪ
ತೋರಿ ತೇಲಿಸು ತಾಯೆ ಕಳೆದೆನ್ನ ಈ ತಾಪ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೧೦
Next post ರಾವಣಾಂತರಂಗ – ೪

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys